Slide
Slide
Slide
previous arrow
next arrow

ಹೆಸ್ಕಾಂ ಕಾಮಗಾರಿಯಿಂದ ಸಂಚಾರಕ್ಕೆ ಅಡಚಣೆ: ಕ್ರಮಕ್ಕೆ ಆಗ್ರಹ

300x250 AD

ಕಾರವಾರ: ತಾಲೂಕಿನ ಶಿರವಾಡದ ಕೈಗಾರಿಕಾ ಪ್ರದೇಶದಿಂದ ಮುಖ್ಯ ರಸ್ತೆಯ ಅಂಚಿನ ಬದಿಯಿಂದ ಶಿರವಾಡದ ಹೆಸ್ಕಾಂ ಗ್ರಿಡ್ ರಿಂದ ಕೊಂಕಣ ರೈಲ್ವೆ ಇಲಾಖೆಗೆ ಕೆ.ವಿ.10 ವಿದ್ಯುತ್ ಪೂರೈಕೆ ಮಾಡುವ ಕಾಮಗಾರಿಯನ್ನು ಮೇ ತಿಂಗಳಲ್ಲಿ ಕೈಗೆತ್ತಿಕೊಳ್ಳಲಾಗಿದೆ. 

ಈಗಾಗಲೇ ಶಿರವಾಡ ಕೈಗಾರಿಕಾ ಪ್ರದೇಶದ ರಸ್ತೆ ಅಂಚಿನಲ್ಲಿ ವಿದ್ಯುತ್ ತಂತಿ ಪೈಂಟ್ ಗಳು ಅಳವಡಿಸುವ ಕಾಮಗಾರಿ ಮುಗಿಸಲಾಗಿದೆ. ಆದರೆ  ಹೊಂಡದಲ್ಲಿ ಮಣ್ಣು ಹಾಕಿ ಮುಚ್ಚಿ ಹಾಕಿದ್ದರಿಂದ  ಈಗ ಸುರಿಯುತ್ತಿರುವ ಬಾರಿ ಮಳೆಗೆ ವಾಹನಗಳು ಹುಗಿದು ಬೀಳಲು ಶುರುವಾಗಿದೆ. ಮತ್ತು ರಸ್ತೆ ತಿರುವಿನಲ್ಲಿ   ಮಧ್ಯದಲ್ಲಿ ಹೊಂಡಗಳು ಬಿದ್ದಿವೆ. ಆದ್ದರಿಂದ ದ್ವಿಚಕ್ರ ವಾಹನ ಸವಾರರು ಬಾರಿ ವಾಹನಗಳು  ತೊಂದರೆ ಅನುಭವಿಸುತ್ತಿದ್ದಾರೆ.ಅಷ್ಟೆಯಲ್ಲದೇ ಇದೇ ಮಾರ್ಗದಿಂದ ಸಣ್ಣ ಸಣ್ಣ ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ.  ಕೈಗಾರಿಕಾ ಪ್ರದೇಶದಲ್ಲಿ ತಮ್ಮ ಕೆಲಸ ಕಾರ್ಯಗಳಿಗೆ ಬರುವ ಉದ್ಯೋಗಿಗಳಾದ ಮಹಿಳೆಯರು ತೀವ್ರ ಸ್ವರೂಪ ಸಂಕಷ್ಟ ಎದುರಿಸುತ್ತಿದ್ದಾರೆ. ಆದರೆ ಕಾಮಗಾರಿ ಯಾವುದೇ ಅಭ್ಯಂತರವಿಲ್ಲ. ಆದರೆ ಕೈಗೊಳ್ಳುವಾಗ ಹಾಗೂ ಮುಗಿದ ಮೇಲೆ  ಸುರಕ್ಷತೆ ಕ್ರಮ ಕೈಗೊಳ್ಳದೇ  ಇರುವುದರಿಂದ ಅವಾಂತರಗಳು ದಿನನಿತ್ಯ ಸಂಭವಿಸುತ್ತಿವೆ .ಈ ಕಾಮಗಾರಿಯಿಂದ ಹಾನಿಯಾದ ರಸ್ತೆಯನ್ನು  ಕೂಡಲೇ ದುರಸ್ತಿ ಕಾರ್ಯ ಮಾಡಬೇಕೆಂದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಕಾರವಾರ ನಗರ ಘಟಕ ಅಧ್ಯಕ್ಷರಾದ ರಾಜಾ ನಾಯ್ಕ ಮನವಿ ಸಲ್ಲಿಸಿದರು.

300x250 AD
Share This
300x250 AD
300x250 AD
300x250 AD
Back to top